ದಿ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಮುದ್ದೇಬಿಹಾಳ, ಕರ್ನಾಟಕ - ಈ ಬ್ಯಾಂಕಿಗೆ ಆರ್ ಬಿ ಐ ವಿತ್ತೀಯ ದಂಡ ವಿಧಿಸಿದೆ - ಆರ್ಬಿಐ - Reserve Bank of India
ದಿ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಮುದ್ದೇಬಿಹಾಳ, ಕರ್ನಾಟಕ - ಈ ಬ್ಯಾಂಕಿಗೆ ಆರ್ ಬಿ ಐ ವಿತ್ತೀಯ ದಂಡ ವಿಧಿಸಿದೆ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ತನ್ನ ಮಾರ್ಚ್ 18, 2025 ರ ಆದೇಶದ ಮೂಲಕ ದಿ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಮುದ್ದೇಬಿಹಾಳ, ಕರ್ನಾಟಕ - ಈ ಬ್ಯಾಂಕಿಗೆ (ಬ್ಯಾಂಕು) ‘ಆದ್ಯತಾ ವಲಯಕ್ಕೆ ಸಾಲ ನೀಡಿಕೆ (PSL) - ಗುರಿಗಳು ಮತ್ತು ವರ್ಗೀಕರಣ’- ಈ ವಿಷಯದಲ್ಲಿ ನೀಡಿದ ಕೆಲವು ನಿರ್ದೇಶನಗಳ ಅನುಪಾಲನೆ ಮಾಡದೇ ಇದ್ದುದಕ್ಕಾಗಿ ಮತ್ತು ಆದ್ಯತಾ ವಲಯಕ್ಕೆ ಸಾಲ ನೀಡಿಕೆಯಲ್ಲಿನ ಸಾಧನೆಯ ಕೊರತೆ ತುಂಬಲು ಕಿರು ಮತ್ತು ಸಣ್ಣ ಉದ್ಯಮಗಳ ರಿಫೈನಾನ್ಸ್ ನಿಧಿಗೆ (MSE Refinance fund) ಕೊಡುಗೆ ನೀಡಲು ನೀಡಿದ ನಿರ್ದಿಷ್ಟ ನಿರ್ದೇಶನದ ಅನುಪಾಲನೆ ಮಾಡದೆ ಇದ್ದುದಕ್ಕಾಗಿ ರೂ. 5.00 ಲಕ್ಷ ( ರೂ. ಐದು ಲಕ್ಷ ಮಾತ್ರ ) ವಿತ್ತೀಯ ದಂಡ ವಿಧಿಸಿದೆ. ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ 1949 ರ ಕಲಂ 47 ಎ (1) (ಸಿ ) ಜೊತೆ ಓದಲಾದ ಕಲಂ 46(4) (i) ಮತ್ತು 56 ರ ಅಡಿಯಲ್ಲಿ ತನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಈ ದಂಡವನ್ನು ವಿಧಿಸಿದೆ. ಬ್ಯಾಂಕಿಗೆ ಒಂದು ನಿರ್ದಿಷ್ಟ ನಿರ್ದೇಶನದ ಮೂಲಕ ಆದ್ಯತಾ ವಲಯಕ್ಕೆ ಸಾಲ ನೀಡಿಕೆ ಗುರಿಯಲ್ಲಿ ಆರ್ಥಿಕ ವರ್ಷ 2022-23 ರಲ್ಲಿ ಉಂಟಾದ ಕೊರತೆಯ ಸಲುವಾಗಿ ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕು (SIDBI) ನಿರ್ವಹಿಸುವ ‘ಕಿರು ಮತ್ತು ಸಣ್ಣ ಉದ್ಯಮಗಳ ರಿಫೈನಾನ್ಸ್ ನಿಧಿ’ (MSE Refinance Fund) ಯಲ್ಲಿ ಒಂದು ನಿರ್ದಿಷ್ಟ ಮೊತ್ತವನ್ನು ಠೇವಣಿ ಇಡಲು ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿತ್ತು. ಈ ನಿರ್ದಿಷ್ಟ ಮೊತ್ತವನ್ನು ಠೇವಣಿ ಇಡಲು ವಿಫಲವಾದುದಕ್ಕಾಗಿ ಬ್ಯಾಂಕಿಗೆ ಒಂದು ಎಚ್ಚರಿಕೆ ಪತ್ರವನ್ನು ನೀಡಿ, ಸೂಚಿಸಲಾದ ಮೊತ್ತವನ್ನು ಠೇವಣಿ ಇಡುವಂತೆ ನಿರ್ದೇಶಿಸಲಾಗಿತ್ತು. ಆದರೂ ಬ್ಯಾಂಕು ಗೊತ್ತುಪಡಿಸಿದ ಠೇವಣಿ ಇಡುವಲ್ಲಿ ವಿಫಲವಾಯಿತು. ಈ ನಿರ್ದೇಶನದ ಅನುಪಾಲನೆ ಆಗದೆ ಇದ್ದುದಕ್ಕಾಗಿ ಮತ್ತು ಈ ಸಂಬಂಧ ನಡೆದ ಪತ್ರ ವ್ಯವಹಾರಗಳನ್ನು ಆಧರಿಸಿ ಬ್ಯಾಂಕಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ನಿರ್ದೇಶನಗಳ ಅನುಪಾಲನೆ ಮಾಡುವಲ್ಲಿ ವಿಫಲವಾದುದಕ್ಕಾಗಿ ಏಕೆ ದಂಡ ವಿಧಿಸಬಾರದು ಎಂದು ಕಾರಣ ಕೇಳಿ ನೋಟೀಸನ್ನು ನೀಡಲಾಗಿತ್ತು. ಬ್ಯಾಂಕು ಈ ಕುರಿತು ಸಲ್ಲಿಸಿದ ಉತ್ತರ ಮತ್ತು ವೈಯಕ್ತಿಕ ವಿಚಾರಣೆಯಲ್ಲಿ ಮಾಡಲಾದ ಮೌಖಿಕ ನಿವೇದನೆಗಳನ್ನು ಪರಿಗಣಿಸಿದ ನಂತರ ಭಾರತೀಯ ರಿಸರ್ವ್ ಬ್ಯಾಂಕಿಗೆ, ಇತರ ವಿಷಯಗಳ ನಡುವೆ, ಬ್ಯಾಂಕಿನ ವಿರುದ್ಧ ಮಾಡಲಾದ ಕೆಳಕಂಡ ಆರೋಪ ಸ್ಥಿರಪಟ್ಟಿದೆ ಮತ್ತು ವಿತ್ತೀಯ ದಂಡ ವಿಧಿಸುವುದಕ್ಕೆ ಅರ್ಹವಾಗಿದೆ ಎಂದು ಗೊತ್ತಾಯಿತು: ಎಚ್ಚರಿಕೆ ಪತ್ರವನ್ನು ನೀಡಿದ ನಂತರವೂ, ಆರ್ಥಿಕ ವರ್ಷ 2022-23 ರಲ್ಲಿ ಆದ್ಯತಾ ವಲಯಕ್ಕೆ ಸಾಲ ನೀಡಿಕೆಯಲ್ಲಿನ ಗುರಿ ತಲುಪುವಲ್ಲಿ ಆದ ಕೊರತೆ ಸಲುವಾಗಿ ಗೊತ್ತು ಪಡಿಸಿದ ಮೊತ್ತವನ್ನು ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕು (SIDBI) ನಿರ್ವಹಿಸುವ ಕಿರು ಮತ್ತು ಸಣ್ಣ ಉದ್ಯಮಗಳ ರಿಫೈನಾನ್ಸ್ ನಿಧಿಯಲ್ಲಿ (MSE Refinance fund) ಠೇವಣಿ ಇಡುವಲ್ಲಿ ಬ್ಯಾಂಕು ವಿಫಲವಾಗಿತ್ತು. ನಿಯಂತ್ರಣ ಅನುಪಾಲನೆಯಲ್ಲಿ ಕಂಡುಬಂದ ಕೊರತೆಗಾಗಿ ಮೇಲಿನ ಕ್ರಮವನ್ನು ತೆಗೆದುಕೊಳ್ಳಲಾಗಿದೆಯೇ ವಿನಃ ಇದು ಬ್ಯಾಂಕು ತನ್ನ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವ್ಯವಹಾರ ಅಥವಾ ಒಪ್ಪಂದದ ಸಿಂಧುತ್ವದ ಬಗೆಗಿನ ಘೋಷಣೆಯಲ್ಲ. ಅಲ್ಲದೆ, ಈ ವಿತ್ತೀಯ ದಂಡ ವಿಧಿಸುವ ಕ್ರಿಯೆಯು ಭಾರತೀಯ ರಿಸರ್ವ್ ಬ್ಯಾಂಕು ಈ ಬ್ಯಾಂಕಿನ ಮೇಲೆ ತೆಗೆದುಕೊಳ್ಳಬಹುದಾದ ಯಾವುದೇ ಇತರ ಕ್ರಮದ ಪೂರ್ವಾಗ್ರಹದಿಂದ ಹೊರತಾಗಿದೆ. (ಪುನೀತ್ ಪಾಂಚೋಲಿ) ಪತ್ರಿಕಾ ಪ್ರಕಟಣೆ: 2024-2025/2427 |