ವಿಶ್ವಕಲ್ಯಾಣ ಸಹಕಾರ ಬ್ಯಾಂಕು ನಿಯಮಿತ, ಹುಬ್ಬಳ್ಳಿ, ಕರ್ನಾಟಕ - ಈ ಬ್ಯಾಂಕಿಗೆ ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತೀಯ ದಂಡ ವಿಧಿಸಿದೆ - ಆರ್ಬಿಐ - Reserve Bank of India
ವಿಶ್ವಕಲ್ಯಾಣ ಸಹಕಾರ ಬ್ಯಾಂಕು ನಿಯಮಿತ, ಹುಬ್ಬಳ್ಳಿ, ಕರ್ನಾಟಕ - ಈ ಬ್ಯಾಂಕಿಗೆ ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತೀಯ ದಂಡ ವಿಧಿಸಿದೆ
‘ಅನಾವರಣ ಮಾನದಂಡಗಳು, ಶಾಸನಬದ್ಧ ಮತ್ತು ಇತರ ನಿರ್ಬಂಧಗಳು - ಪೌರ ಸಹಕಾರಿ ಬ್ಯಾಂಕುಗಳು’ ಕುರಿತು ತನ್ನ ಕೆಲವು ನಿರ್ದೇಶನಗಳ ಅನುಪಾಲನೆ ಮಾಡದೇ ಇದ್ದುದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ತನ್ನ ಜೂನ್ 5, 2024ರ ಆದೇಶದ ಮೂಲಕ ಕರ್ನಾಟಕದ ಹುಬ್ಬಳ್ಳಿಯ ವಿಶ್ವಕಲ್ಯಾಣ ಸಹಕಾರ ಬ್ಯಾಂಕು ನಿಯಮಿತ, ಹುಬ್ಬಳ್ಳಿ (ಬ್ಯಾಂಕು) - ಈ ಬ್ಯಾಂಕಿಗೆ ರೂ. 25,000/- ಗಳ (ರೂ. ಇಪ್ಪತೈದು ಸಾವಿರ ಮಾತ್ರ) ದಂಡ ವಿಧಿಸಿದೆ. ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ 1949ರ ಕಲಂ 46(4) (i) ಮತ್ತು 56 ರ ಜೊತೆಗೆ ಓದಲಾದ ಕಲಂ 47 ಎ(1)(ಸಿ) ಪ್ರಕಾರ ತನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ದಂಡವನ್ನು ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿದೆ. ದಿನಾಂಕ ಮಾರ್ಚ್ 31, 2022 ರಂದು ಇದ್ದ ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯ ಶಾಸನಬದ್ದ ನಿರೀಕ್ಷಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿತು. ರಿಸರ್ವ್ ಬ್ಯಾಂಕಿನ ನಿರ್ದೇಶನಗಳ ಅನುಪಾಲನೆಯಾಗಿಲ್ಲ ಎಂಬ ಮೇಲ್ವಿಚಾರಣಾ ಶೋಧನೆಗಳನ್ನು ಆಧರಿಸಿ ಮತ್ತು ಈ ಸಂಬಂಧ ನಡೆದ ಪತ್ರ ವ್ಯವಹಾರವನ್ನು ಪರಿಗಣಿಸಿ ಈ ನಿರ್ದೇಶನಗಳ ಅನುಪಾಲನೆಯಲ್ಲಿ ಆದ ವಿಫಲತೆಗಾಗಿ ಬ್ಯಾಂಕಿಗೆ ಏಕೆ ದಂಡ ವಿಧಿಸಬಾರದು ಎಂಬುದಕ್ಕೆ ಕಾರಣ ಕೇಳಿ ನೋಟೀಸ್ ಒಂದನ್ನು ಜಾರಿ ಮಾಡಲಾಯಿತು. ಬ್ಯಾಂಕು ಈ ನೋಟೀಸಿಗೆ ಸಲ್ಲಿಸಿದ ಉತ್ತರ, ವೈಯಕ್ತಿಕ ವಿಚಾರಣೆಯ ಸಂದರ್ಭದಲ್ಲಿ ಸಲ್ಲಿಸಿದ ಮೌಖಿಕ ಸಮಜಾಯಿಷಿಗಳನ್ನು ಪರಿಗಣಿಸಿದ ನಂತರ, ಇತರ ವಿಷಯಗಳ ನಡುವೆ, ಬ್ಯಾಂಕಿನ ವಿರುದ್ಧ ಮಾಡಲಾದ ವಿವೇಕಯುತ ಅಂತರ ಬ್ಯಾಂಕು (ಒಟ್ಟು ) ಮತ್ತು ಪ್ರತಿಪಕ್ಷದ ಅನಾವರಣ ಮಿತಿ ಕುರಿತ ನಿರ್ದೇಶನಗಳ ಅನುಪಾಲನೆಯಾಗಿಲ್ಲ ಎಂಬ ಆಪಾದನೆ ಪುಷ್ಟೀಕರಣಗೊಂಡಿದೆಯೆಂದೂ ಮತ್ತು ದಂಡ ವಿಧಿಸುವುದು ಸಮುಚಿತವಾಗಿದೆಯೆಂದೂ ಗೊತ್ತಾಯಿತು. ಈ ಮೇಲಿನ ಕ್ರಮವು ನಿಯಂತ್ರಣ ಅನುಪಾಲನೆಯಲ್ಲಿ ಆದ ಕೊರತೆಗಳ ವಿರುದ್ಧದ ಕ್ರಮ ಮಾತ್ರ ಆಗಿದೆಯೇ ವಿನಃ ಬ್ಯಾಂಕು ತನ್ನ ಗ್ರಾಹಕರೊಂದಿಗೆ ನಡೆಸುವ ಯಾವುದೇ ವ್ಯವಹಾರ/ಒಪ್ಪಂದಗಳ ಬಗೆಗಿನ ಸಿಂಧುತ್ವದ ಬಗ್ಗೆ ಅಭಿಪ್ರಾಯವಲ್ಲ. ಅಲ್ಲದೆ, ಈ ದಂಡ ವಿಧಿಸುವ ಕ್ರಮವು ಭಾರತೀಯ ರಿಸರ್ವ್ ಬ್ಯಾಂಕು ಈ ಬ್ಯಾಂಕಿನ ವಿರುದ್ಧ ಮುಂದೆ ಕೈಗೊಳ್ಳಬಹುದಾದ ಮತ್ಯಾವುದೇ ಕ್ರಮದ ಬಗೆಗಿನ ಪೂರ್ವಾಗ್ರಹದಿಂದ ಮುಕ್ತವಾಗಿದೆ. (ಪುನೀತ್ ಪಾಂಚೋಲಿ) ಪತ್ರಿಕಾ ಪ್ರಕಟಣೆ: 2024-2025/476 |